ಉಚಿತ ಲ್ಯಾಪ್‌ಟಾಪ್ ವಿತರಣಾ ಸಮಾರಂಭ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಪದವಿ ವಿದ್ಯಾಲಯದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಸನ್ಮಾನ್ಯ ಶ್ರೀ ಡಿ.ವಿ ಸದಾನಂದ ಗೌಡ ಇವರ ಉಪಸ್ಥಿತಿಯಲ್ಲಿ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಡಾ| ಪ್ರಭಾಕರ ಭಟ್, ಕಲ್ಲಡ್ಕ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇವರು  ವಹಿಸಿದ್ದರು. ಮಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ರಾಜೇಶ್ ನಾಕ್ ಯು. ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಡಾ| ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷರು, ಕ.ರಾ.ಸ.ಮಾ.ಮ.ನಿ.ಬೆಂಗಳೂರು., ನಿರ್ದೇಶಕರು, ಇಫ್ಕೋ ನವದೆಹಲಿ, ಅಧ್ಯಕ್ಷರು ದ.ಕ.ಜಿಲ್ಲಾ ಕೇಂದ್ರ. ಸಹಕಾರ ಬ್ಯಾಂಕ್, ಮಂಗಳೂರು ಸನ್ಮಾನ್ಯ ಶ್ರೀ ಕೆ. ಶ್ರೀನಿವಾಸ ಗೌಡ ಅಧ್ಯಕ್ಷರು, ಐಟಿಜಿಐ., ನಿರ್ದೇಶಕರು, ಇಫ್ಕೋ., ಶಾಸಕರು, ಕೋಲಾರ. ಡಾ| ಶಿವರಾಮ್ ಅಧ್ಯಕ್ಷರು, ಸದಾಸ್ಮಿತ ಪೌಂಡೇಶನ್, ಬೆಂಗಳೂರು ಡಾ| ಸಿ. ನಾರಾಯಣಸ್ವಾಮಿ ಕರ್ನಾಟಕ ರಾಜ್ಯ ಮಾರಾಟ ವ್ಯವಸ್ಥಾಪಕರು, ಇಫ್ಕೋ ಬೆಂಗಳೂರು, ಶ್ರೀ ವಸಂತ ಮಾಧವ ಸಂಚಾಲಕರು, ಶ್ರೀರಾಮ ವಿದ್ಯಾಕೇಂದ್ರ  ಇವರು ಉಪಸ್ಥಿತರಿದ್ದರು

Leave a Reply