ಗ್ರಂಥಪಾಲಕರ ದಿನಾಚರಣೆ

 

ಶಿಕ್ಷಣಕ್ಕೆ ಜಗತ್ತನ್ನು ಗೆಲ್ಲಬಲ್ಲ ಶಕ್ತಿ ಇದೆ. ಒಬ್ಬ ಒಳ್ಳೆಯ ನಾಯಕನಿಗೆ ಈ ಸಮಾಜದಲ್ಲಿ ಶಿಕ್ಷಣದ ಜ್ಞಾನ ತುಂಬಾ ಅಗತ್ಯ, ಶಿಕ್ಷಣ ಇಲ್ಲದವನ ಬದುಕು ಬದುಕೇ ಅಲ್ಲ ಎಂದು ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ವಲಯ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿಗಾರ್ ಅಭಿಪ್ರಾಯಪಟ್ಟರು. ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ. ಇಲ್ಲಿಯ ಪ್ರತಿಭಾ ರಾಮ ಸಾಹಿತ್ಯ ಸಂಘದ ವತಿಯಿಂದ ನಡೆದ, ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿ, ಪುಸ್ತಕವು ಜ್ಞಾನದ ಭಂಡಾರ ವಾದರೆ,ಗ್ರಂಥಾಲಯವು ಪುಸ್ತಕಗಳ ಭಂಡಾರವಗಿದೆ. ನಮ್ಮ ಜ್ಞಾನದ ಹಸಿವನ್ನು ಪುಸ್ತಕಗಳು ನೀಗಿಸುತ್ತವೆ, ಪ್ರಪಂಚದ ಅನೇಕ ಜ್ಞಾನಗಳು ಒಂದೇ ಕಡೆಯಲ್ಲಿ ಸಿಗುತ್ತದೆ ಎಂದಿದ್ದರೆ, ಅದು ಗ್ರಂಥಾಲಯದಲ್ಲಿ ಮಾತ್ರ, ಎಂದು ಅಭಿಪ್ರಾಯಪಟ್ಟರು.

Leave a Reply