ಯೋಗ ಶಿಕ್ಷಕರ ತರಬೇತಿ ಶಿಬಿರ ಅ: 17-19

ನಮ್ಮ ದೇಶದ ಸಂಸ್ಕೃತಿ ಆಧುನಿಕತೆಗೆ ಸೆರೆಯಾಗುತ್ತಿರುವ ಜೊತೆಗೆ ಅನಾರೋಗ್ಯಕರ ಭಾರತವಾಗುವುದಕ್ಕೆ ಹೊಸ್ತಿಲಲ್ಲಿ ನಿಂತಿದೆ. ಯೋಗ ಎಂಬುದು ಜ್ಞಾನ ಮಾರ್ಗ ಅಂತೆಯೇ ಮಾನಸಿಕ ಹಾಗೂ ದೈಹಿಕ ಪದ್ದತಿಯನ್ನು ಒಟ್ಟುಗೂಡಿಸುವ ಪ್ರಮೇಯ ಪದ್ಧತಿಯಾಗಿದೆ. ಎಂದು ಸಂವಿತ್‌ನ ನಿರ್ದೇಶಕರಾಗಿರುವ ಡಾ| ಮಲ್ಲೇಪುರಂ ವೆಂಕಟೇಶ್‌ರವರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ವಿದ್ಯಾಭಾರತಿ ಹಾಗೂ ರಾಷ್ಟ್ರೋತ್ಥಾನದ ಸಂವಿತ್‌ನ ೩ ದಿನದ ಜಿಲ್ಲಾ ಮಟ್ಟದ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವರವರು ಯೋಗವು ಮಕ್ಕಳಲ್ಲಿ ಕಲಿಕೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ, ಯೋಗಾಭ್ಯಾಸವು ಮಗುವಿನಲ್ಲಿ ಹೊಸ ಹೊಸ ಚಿಂತನೆಗಳನ್ನು ಬೆಳೆಸುತ್ತದೆ ಎಂದರು.
ವೇದಿಕೆಯಲ್ಲಿದ್ದ ಸಂವಿತ್‌ನ ಮುಖ್ಯ ವ್ಯವಸ್ಥಾಪಕರಾದ ವಸಂತ ಲಕ್ಷ್ಮಿಯವರು ಯೋಗ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂವಿತ್ ಯೋಗ ಅಧ್ಯಯನ ತಂಡದ ವ್ಯವಸ್ಥಾಪಕರಾದ ಮಂಜುನಾಥ್, ಸಂವಿತ್‌ನ ಯೋಗ ಅಧ್ಯಯನ ತಂಡದ ಮಾರ್ಗದರ್ಶಿಯಾಗಿರುವ ಸುಬ್ಬು, ಸಂವಿತ್ ಜಿಲ್ಲಾ ಕಾರ‍್ಯದರ್ಶಿ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಯೋಗ ಶಿಕ್ಷಕರಾದ ಶ್ರೀ ಸಂಜಯ್ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವಿದ್ಯಾಭಾರತಿಯ ವಿವಿಧ ವಿದ್ಯಾಸಂಸ್ಥೆಗಳ ಯೋಗ ಶಿಕ್ಷಕರು ಭಾಗವಹಿಸಿದ್ದರು. ಕಾರ‍್ಯಕ್ರಮವನ್ನು ಸಂವಿತ್‌ನ ಯೋಗ ಸಂಶೋಧನಾ ತಂಡದ ವ್ಯವಸ್ಥಾಪಕರಾದ ಮಂಜುನಾಥ್‌ರವರು ಸ್ವಾಗತಿಸಿ ಸಂವಿತ್‌ನ ಯೋಗ ಅಧ್ಯಯನ ತಂಡದ ಸುಬ್ಬುರವರು ವಂದಿಸಿದರು. ಪ್ರೌಢಶಾಲಾ ಶಿಕ್ಷಕಿಯಾದ ಭಾಗ್ಯಶ್ರೀ ಬಿ.ಎಸ್. ಇವರು ಕಾರ‍್ಯಕ್ರಮವನ್ನು ನಿರೂಪಿಸಿದರು.

Leave a Reply