ಅ: 26 : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗೋಪೂಜೆ, ನೂತನ ಶಿಶುಮಂದಿರ ಕುಟೀರ ಉದ್ಘಾಟನೆ ಹಾಗೂ ಮಹೇಂದ್ರ ಕಟ್ಟಡದ ಶಿಲಾನ್ಯಾಸ ಶ್ರೀರಾಮ ವಿದ್ಯಾಕೇಂದ್ರದ ಕಲ್ಲಡ್ಕದ ವಸುಧಾರ ಗೋಶಾಲೆಯಲ್ಲಿ ಗೋವುಗಳಿಗೆ ಹೂಮಾಲೆ ಹಾಕಿ ಆರತಿ ಮಾಡಿ ಗೋಪೂಜೆ ಮಾಡಲಾಯಿತು. ನೂತನವಾಗಿ ನಿರ್ಮಾಣಗೊಂಡ ’ಸೀತಾ’ ಶಿಶುಮಂದಿರ ಕಟ್ಟಡವನ್ನು ಖ್ಯಾತ ಚಿತ್ರ ನಟಿ ಶ್ರೀಮತಿ ಅಮೂಲ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಈ ವಿದ್ಯಾಕೇಂದ್ರಕ್ಕೆ ನನಗೆ ಬರುವುದಕ್ಕೆ ಅವಕಾಶ ದೊರಕಿದ್ದು ತುಂಬಾ ಸಂತೋಷವಾಗಿದೆ. ಇಲ್ಲಿನ ವಿದ್ಯಾರ್ಥಿಗಳನ್ನು ಕಂಡಾಗ ನನಗೆ ತುಂಬಾ […]
ಬಂಟ್ವಾಳ:ಸೆ.೫: ಯೋಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಒಂದು ಜೀವನ ಪದ್ದತಿಯಾದ್ದರಿಂದ ಇದು ಕೇವಲ ದೈಹಿಕ ಶಿಕ್ಷಣ ಚಟುವಟಿಕೆಯ ವಿಭಾಗವಾಗದೇ ಇದಕ್ಕಾಗಿಯೇ ಪ್ರತ್ಯೇಕ ವಿಭಾಗವನ್ನು, ಉಪನ್ಯಾಸಕರನ್ನು ನೇಮಿಸಬೇಕಾಗಿದೆ. ಸರಕಾರವು, ಯೋಗಾಸಕ್ತರು ಇದಕ್ಕಾಗಿ ವಿಶೇಷವಾಗಿ ಪ್ರಯತ್ನಿಸಬೇಕಾಗಿದೆ. ಆದರೆ ಈ ಬಾರಿ ಸರಕಾರದ ನೇಮಕಾತಿಯಲ್ಲಿ ದೈಹಿಕ ಶಿಕ್ಷಣ ವಿಭಾಗಕ್ಕೆ ಯಾವುದೇ ಅವಕಾಶ ಸಿಗದಿರುವುದು ದುರಂತ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಕಿಶೋರ್ ಕುಮಾರ್ ಸಿ.ಕೆ ಇವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ […]