ಜನವರಿ28 ಶ್ರೀ ರಾಮ ಪ್ರೌಢ ಶಾಲೆಯಲ್ಲಿ ” ಮಂಗಳೂರು ವಿದ್ಯುಶ್ಚಕ್ತಿ ಸರಬರಾಜು ಕಂಪನಿ ನಿಯಮಿತ ” ಇವರ ವತಿಯಿಂದ “ವಿದ್ಯುತ್ ಸುರಕ್ಷತಾ ಸಪ್ತಾಹ-2019 ” ಎಂಬ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಭಟ್ ಕೊಡಕಲ್ಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರು ವಿದ್ಯಾರ್ಥಿಗಳಿಗೆ ವಿದ್ಯುತ್ ಶಕ್ತಿಯಿಂದ ಆಗುವ ಅನಾಹುತ, ಉಪಯೋಗ ಹಾಗು ವಿದ್ಯುತ್ತನ್ನು ಬಳಸುವ ಕ್ರಮದ , ಬಗ್ಗೆ ಸವಿವರವಾಗಿ ತಿಳಿಸಿದರು.
19.1.2019 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರಲ್ಲಿ ” ತಾಯಂದಿರ ಪಾದಪೂಜೆ” ಕಾರ್ಯಕ್ರಮವು ನಡೆಯಿತು. 1ನೇ ತರಗತಿಯಲ್ಲಿರುವ ಸುಮಾರು 173 ಮಕ್ಕಳ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದರು ಮಕ್ಕಳು ತಾಯಂದಿರ ಪಾದ ತೊಳೆದು ಅರಸಿನ ಕುಂಕುಮ ಹಚ್ಚಿ, ಪಾದಗಳಿಗೆ ಹೂವಿನ ಅರ್ಚನೆ ಮಾಡಿ ಪಾದಗಳಿಗೆ ನಮಸ್ಕಾರ ಮಾಡಿದರು, ಹಾಗೆಯೇ ತಾಯಂದಿರು ಮಕ್ಕಳಿಗೆ ಅಕ್ಷತೆ ಹಾಕಿ ಆಶಿರ್ವಾದಿಸಿ ಸಿಹಿತಿನಿಸಿದರು.
ಪೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ photos ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ಅಕ್ಟೋಬರ್ ೧೦ ರಿಂದ ಆರಂಭಗೊಂಡ ಉತ್ಥಾನ ರಾಷ್ಟ್ರೀಯ ಬಾಲಿಕಾ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭವು ಅಕ್ಟೋಬರ್ ೧೬ರಂದು ವಿದ್ಯಾಕೇಂದ್ರದ ಸಾಧನಾ ಭವನದಲ್ಲಿ ನಡೆುತು. ‘ಜೀವನದ ಉನ್ನತಿಗೆ ಸಮಾಜದ ನೆಮ್ಮದಿಗೆ ಅಗತ್ಯ ಎನಿಸಿದ ಇಂತಹ ಶಿಬಿರಗಳಲ್ಲಿ ನಾವು ಪಾಲ್ಗೊಳ್ಳಬೇಕು. ನಮ್ಮ ಸಮಾಜದ ಅಡಿಪಾಯ ಕುಟುಂಬ, ಕುಟುಂಬದ ನಿರ್ವಹಣೆ ಮಾಡಬೇಕಾದ ತಾಯಂದಿರು ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಆಕೆ ದುರ್ಗೆಯಂತೆ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಸ್ತ್ರೀವಾದ ಎನ್ನುವಂತಹ ಪಾಶ್ಚಾತ್ಯ […]