ಶ್ರೀರಾಮ ವರ್ತುಲ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರ

Saturday, September 15th, 2018
ಶ್ರೀರಾಮ ವರ್ತುಲ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರ

ಶ್ರೀರಾಮ ವರ್ತುಲ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರ ಯಾವುದೇ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಸಮಾಜದ ಬಗ್ಗೆ ಉತ್ತಮವಾದ ಭಾವನೆ ಹೊಂದಿ ಸಮಾಜಕ್ಕಾಗಿ ತನ್ನ ಬದುಕನ್ನು ಸವೆಸುವಂತಾಗಬೇಕು. ಸರ್.ಎಂ.ವಿಶ್ವೇಶ್ವರಯ್ಯನವರು ಈ ರೀತಿ ಬದುಕಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಂಡರು. ಅಂತಹ ಸಾರ್ಥಕ ಬದುಕನ್ನು ಬದುಕುವ, ಉತ್ತಮ ವ್ಯಕ್ತಿಗಳನ್ನು ರೂಪಿಸುವ ಕಾರ್ಯ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ.) ಪುತ್ತೂರು ನಡೆಸುತ್ತಿದೆ. ವಿದ್ಯಾವರ್ಧಕ ಸಂಘದ ಈ ದೃಷ್ಟಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರ ಮನಸ್ಸುಗಳನ್ನು ಈ ಕಾರ್ಯಕ್ಕೆ ತಯಾರುಗೊಳಿಸಲು ಇಂತಹ ಕಾರ್ಯಾಗಾರಗಳು […]

ಪ್ರೌಢಶಾಲಾ ಶಿಕ್ಷಕರ ಬೋಧನಾ ಸಾಮರ್ಥ್ಯ ಮತ್ತು ಬೋಧನಾ ತಂತ್ರಗಳ ಅಭಿವೃದ್ಧಿ, ಅಕ್ಷರ ಶಿಕ್ಷಕರ ಕಾರ್ಯಾಗಾರ

Tuesday, September 11th, 2018
ಪ್ರೌಢಶಾಲಾ ಶಿಕ್ಷಕರ ಬೋಧನಾ ಸಾಮರ್ಥ್ಯ ಮತ್ತು ಬೋಧನಾ ತಂತ್ರಗಳ ಅಭಿವೃದ್ಧಿ, ಅಕ್ಷರ ಶಿಕ್ಷಕರ ಕಾರ್ಯಾಗಾರ

  11.9.2018 ಶಿಕ್ಷಕ ಎಂದರೆ ಮಗುವಿಗೆ ಕೇವಲ ಪಠ್ಯ ವಿಷಯಗಳನ್ನು ಬೋಧಿಸುವವರು ಮಾತ್ರ ಅಲ್ಲ, ಬದಲಾಗಿ ಮಗುವಿನಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಾಯೋಜಕನಾಗಬೇಕು. ಭಾಷಾ ಅಧ್ಯಾಪಕರು ಐಚ್ಛಿಕ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ ಮಾತ್ರ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಯಲು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕರವರು ಪ್ರೌಢಶಾಲಾ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು. ಇವರು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, […]

ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Thursday, September 6th, 2018
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 5.9.2018 ರಂದು ಶಿಕ್ಷಕರ ದಿನಾಚರಣೆಯನ್ನು ವೇದವ್ಯಾಸ ಮಂದಿರದಲ್ಲಿ ಆಚರಿಸಲಾಯಿತು. “ಗುರು-ಶಿಷ್ಯ ಸಂಬಂಧ ಕೇವಲ + ಬಂಧ ಆಗಿರದೇ ಸಮ್ಯಕ್ ಬಂಧ ಆಗಿರಬೇಕು. ಗುರು, ಮಕ್ಕಳ ಮನಸ್ಸೆಂಬ ಹೂದೋಟದಲ್ಲಿ ಗಿಡಗಳನ್ನು ನೆಡುವುದಿಲ್ಲ ಬದಲಾಗಿ ಗಿಡಗಳು ಬೆಳೆಯಬೇಕಾದ ಬೀಜಗಳನ್ನು ಹಾಗೂ ಗಿಡಗಳು ಹುಲುಸಾಗಿ ಬೆಳೆದು ಹೂ ಬಿಡಲು, ಫಲ ಕೊಡಲು ಬೇಕಾದ ಗೊಬ್ಬರವನ್ನು ಒದಗಿಸುತ್ತಾನೆ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂತೋಷ್ ಶ್ರೀಮಾನ್ ಇವರು ಸರ್ವಪಲ್ಲಿ ರಾಧಾಕೃಷ್ಣನವರ 124 ನೇ ಜನ್ಮದಿನದ ಪ್ರಯುಕ್ತ ಮಾತಾನಾಡುತ್ತ […]

ಪ್ರೌಢಶಾಲಾ ವಿಭಾಗದ ಪೋಷಕರ ಸಭೆ

Thursday, September 6th, 2018

ದಿನಾಂಕ 05.09.2018 ಸಂಸ್ಕಾರಯುತ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರೀರಾಮ ಶಿಕ್ಷಣ ಸಂಸ್ಥೆ ರಾಜ್ಯದಲ್ಲೇ ವೈಶಿಷ್ಟ್ಯ ಸ್ಥಾನವನ್ನು ಪಡೆದುಕೊಂಡಿದೆ. ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಶಿಕ್ಷಣ ನೀಡುವುದಲ್ಲದೆ, ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇಂತಹ ಸದುದ್ದೇಶಕ್ಕೆ ಮಕ್ಕಳ ಪೋಷಕರು ಸಂಸ್ಥೆಯೊಂದಿಗೆ ಕೈಜೋಡಿಸಿ ಸಂಸ್ಥೆಯ ಏಳಿಗೆಗಾಗಿ ಪಾತ್ರರಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ಪೋಷಕರನ್ನುದ್ದೇಶಿಸಿ ಮಾತನಾಡಿದರು. ಇವರು ಶ್ರೀರಾಮ ಪ್ರೌಢಶಾಲಾ ವಿಭಾಗದ ಪೋಷಕರ ಸಮಾವೇಶದಲ್ಲಿ ಮಾತನಾಡಿದ ಅವರು ರಾಷ್ಟ್ರದ […]

ಶಿಕ್ಷಕರ ದಿನಾಚರಣೆ, ಕಾಲೇಜು ವಾರ್ಷಿಕ ಸಂಚಿಕೆ ರಾಮಧ್ವನಿ ಬಿಡುಗಡೆ

Wednesday, September 5th, 2018
ಶಿಕ್ಷಕರ ದಿನಾಚರಣೆ, ಕಾಲೇಜು ವಾರ್ಷಿಕ ಸಂಚಿಕೆ ರಾಮಧ್ವನಿ ಬಿಡುಗಡೆ

ಸಾವಿರಾರು ಮಹಾ ಪುರುಷರಿಗೆ ಜನ್ಮವಿತ್ತ ದೇಶ ಭಾರತ. ಪ್ರಚಂಚದ ಬೇರೆ ಯಾವುದೇ ರಾಷ್ಟ್ರಗಳಿಗೆ ಹೋಲಿಸಿದರೆ ಇಷ್ಟೊಂದು ಸಂಖ್ಯೆಯ ದೇಶಭಕ್ತರು ಜನ್ಮ ತಾಳಿರುವುದು ನಮ್ಮ ಹೆಮ್ಮೆ. ಕಾಲಕಾಲಕ್ಕೆ ಈ ಮಹಾಪುರುಷರೇ ನಮ್ಮ ಮಾರ್ಗದರ್ಶಕರು. ಅಂತಹವರ ಪೈಕಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶದ ಅತ್ಯುನ್ನತ ಪದವಿ ಪಡೆದು ಅಷ್ಟೇ ಮೇಲ್ಮಟ್ಟದ ಪ್ರಶಸ್ತಿಗೆ ಭಾಜನರಾದ ಸರ್ವಪಲ್ಲಿ ರಾಧಕೃಷ್ಣನ್‌ರನ್ನು ನೆನಪಿಸುವ ಕಾರ್ಯಕ್ರಮವೇ ಶಿಕ್ಷಕರ ದಿನಾಚರಣೆ ಎಂದು ಪದವಿ ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕ ಸಚಿನ್ ನುಡಿದರು. ಅವರು ಶ್ರೀರಾಮ ಪದವಿ ಕಾಲೇಜಿನಲ್ಲಿ ನಡೆದ […]

ಶ್ರೀರಾಮ ಪದವಿ ಕಾಲೇಜಿನಲ್ಲಿ ಹೆತ್ತವರ ಸಭೆ

Tuesday, September 4th, 2018
ಶ್ರೀರಾಮ ಪದವಿ ಕಾಲೇಜಿನಲ್ಲಿ ಹೆತ್ತವರ ಸಭೆ

 ಸೆ: ೦4, ನಮ್ಮವರಿಂದಲೇ ನಮ್ಮತನದ ನಾಶವಾದರೆ ಅದನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ಈ ರೀತಿಯ ವಿಕೃತ ಭಾವನೆ ಬೆಳೆಯದಂತೆ ಮಾಡಬೇಕಾದ ಕೆಲಸ ಶಿಕ್ಷಣದಿಂದಲೇ ಸಾಧ್ಯ. ಅಂತಹ ಶಿಕ್ಷಣವನ್ನು ಎಳಮೆಂದಲೇ ನೀಡಬೇಕಾದ ಅನಿವಾರ್ಯತೆಯಿದೆ. ಆ ಕೆಲಸವನ್ನು ನಮ್ಮ ವಿದ್ಯಾಸಂಸ್ಥೆ ಮಾಡುತ್ತಿದೆ. ಪದವಿ ಹಂತದಲ್ಲೂ ಪ್ರಾರ್ಥನೆ, ಭಜನೆ, ಸಭ್ಯತೆ, ಸಂಸ್ಕಾರ ಮೂಡಿಸಲು ಸಾಧ್ಯವೆಂಬ ವಿಶ್ವಾಸವೂ ಬಂದಿದೆ. ಇದಕ್ಕೆ ಪೋಷಕರ ಸಹಕಾರ ಅಗತ್ಯವಿದೆ. ಕಾಲೇಜಿನ ಒಳಗಡೆ ವಿದ್ಯಾರ್ಥಿಗಳು – ಶಿಕ್ಷಕರು ಜೊತೆಗಿರುತ್ತಾರೆ. ಆದರೆ ಆಡಳಿತ ಮಂಡಳಿಯ ಜೊತೆಗೆ ಸೇರಿಕೊಂಡು ಪಾಲಕರೂ […]

ವಿದ್ಯಾರ್ಥಿಗಳಿಂದ ಕೃಷ್ಣ ವೇಷ

Tuesday, September 4th, 2018

ಶ್ರೀರಾಮ ಮಂದಿರ ಕಲ್ಲಡ್ಕ ಇಲ್ಲಿ ನಡೆದ 86ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ  ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವಿದ್ಯಾರ್ಥಿಗಳು ಕೃಷ್ಣ ವೇಷಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರು  ಮತ್ತು ಶ್ರೀರಾಮ ಶಿಶುಮಂದಿರದ ಪುಟಾಣಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. Photo:  ವಿದ್ಯಾರ್ಥಿಗಳಿಂದ ಕೃಷ್ಣ ವೇಷ

ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

Tuesday, August 28th, 2018
ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 28.8.2018ರಂದು ಪೋಷಕರ ಸಭೆ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ ಪ್ರಭಾಕರ ಭಟ್ ಮಾರ್ಗದರ್ಶನ ಮಾಡಿದರು. ವಿದ್ಯಾಕೇಂದ್ರದ ಅಧ್ಯಕ್ಷರು ಶ್ರೀ ಬಿ. ನಾರಾಯಣ ಸೋಮಯಾಜಿ, ಸಂಚಾಲಕರು ಶ್ರೀ ವಸಂತ ಮಾಧವ , ಸಹ ಸಂಚಾಲಕ ಶ್ರೀ ರಮೇಶ್ ಎನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಶ್ರೀ ಚಂದ್ರಶೇಖರ ಸಾಲಯಾನ್, ಮುಖ್ಯೋಪಾಧ್ಯಾಯರು ಶ್ರೀ ರವಿರಾಜ್ ಕಣಂತೂರು, ಆಡಳಿತ ಮಂಡಳಿ ಸದಸ್ಯರು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಮಾತೃ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ […]

ಶ್ರೀರಾಮ ಪದವಿ ಕಾಲೇಜಿನಲ್ಲಿ ರಕ್ಷಾಬಂಧನ ಪ್ರದ್ಯೋತ ಸಂಸ್ಕೃತ ಸಂಘ ಉದ್ಘಾಟನೆ

Tuesday, August 28th, 2018
ಶ್ರೀರಾಮ ಪದವಿ ಕಾಲೇಜಿನಲ್ಲಿ ರಕ್ಷಾಬಂಧನ ಪ್ರದ್ಯೋತ ಸಂಸ್ಕೃತ ಸಂಘ ಉದ್ಘಾಟನೆ

ಕಲ್ಲಡ್ಕ, ಆ: 28, ಜಗತ್ತಿನಲ್ಲಿಯೇ ಭಾವನೆಯನ್ನು ತುಂಬಿಕೊಂಡಿರುವ ದೇಶ ಭಾರತ. ನೂರಾರು ಭಾಷೆ ಸಂಸ್ಕೃತಿಗಳಿದ್ದರೂ ಅದರದ್ದೇ ಆದ ವಿಶೇಷತೆಯ ಕಾರಣಕ್ಕೆ ಒಂದು ಬಹು ಸಂಸ್ಕೃತಿಯ ರಾಷ್ಟ್ರವಾಗಿ ಬೆಳೆದಿದೆ. ಶ್ರಾವಣ ಹುಣ್ಣಿಮೆಯ ದಿವಸ ಅಚರಿಸುವ ರಕ್ಷಾಬಂಧನವನ್ನು ಎಲೆ ಮರೆಯ ಕಾುಯಂತೆ ನಮ್ಮ ವಿದ್ಯಾ ಕೇಂದ್ರದ ಸ್ವಚ್ಛತಾ ಸಿಬ್ಬಂದಿ ವರ್ಗದವರೊಂದಿಗೆ ಆಚರಿಸಿಕೊಳ್ಳುತ್ತಿರುವುದು ಅದ್ಭುತವಾದ, ಭಾವನಾತ್ಮಕ ಕಾರ್ಯಕ್ರಮವಷ್ಟೇ ಅಲ್ಲದೇ ಹೊಸ ಕಲ್ಪನೆ ಹಾಗೂ ಯೋಜನೆಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. […]

ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ ಹಾಗೂ ರಕ್ಷಾಬಂಧನ

Monday, August 27th, 2018

ದಿನಾಂಕ 27.8.2018 ಮನುಷ್ಯ ಹೇಗೆ ಬದುಕಬೇಕು, ಹಾಗೂ ಬದುಕಲು ಬೇಕಾದ ವಿಷಯವನ್ನು ವೇದದಲ್ಲಿ ನೀಡಲಾಗಿದೆ. ಜೀವನದಲ್ಲಿ ಯಾವುದೇ ಜ್ಞಾನ ಪಡೆಯಬೇಕಾದರೆ ಸಂಸ್ಕೃತದಿಂದ ಮಾತ್ರ ಸಾಧ್ಯ. ಸಂಸ್ಕೃತೋತ್ಸವ ಕಾರ್ಯಕ್ರಮ ಸಂಸ್ಕೃತ ಅರಿಯದಿರುವವರಿಗೆ, ಅರಿತುಕೊಳ್ಳಲು ಪ್ರೇರಣೆಯಾಗಲಿ ಎಂದು ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರು ಶ್ರೀರಾಮ ಪ್ರೌಢಶಾಲಾ ಸಂಸ್ಕೃತೋತ್ಸವದ ಕುರಿತು ಮಾತನಾಡಿದರು. ರಕ್ಷಾ ಬಂಧನ : ಜಾತಿ, ಭಾಷೆ, ಮತ, ಸಂಪ್ರದಾಯ, ವರ್ಣ ಹೇಗೆ ನೂರಾರು ರೀತಿಯ ಜನಾಂಗದವರು ಒಂದೇ ಎಂಬ ಜಾಗೃತಿ ಮೂಡಿಸಿ ಸಹೋದರತ್ವ, […]