ಪುಸ್ತಕ ವಿಮೋಚನಾ ಕಾರ್ಯಕ್ರಮ

Monday, August 27th, 2018

ದಿನಾಂಕ 27.8.2018 ಚುಟುಕು ಸಾಹಿತ್ಯ ಕೇವಲ ನಾಲ್ಕು ಗೆರೆಗಳನ್ನು ಹೊಂದಿದ್ದರೂ, ಅದರ ಪ್ರಭಾವ ನಾನಾ ಅರ್ಥಗಳನ್ನು ಹೊಂದಿದೆ. ಪ್ರಸ್ತುತ ಸಮಾಜಕ್ಕೆ ಅದರದ್ದೇ ಆದ ಪ್ರಭಾವ ಬೀರುತ್ತಿದೆ. ಇಂತಹ ಚುಟುಕುಗಳನ್ನು ನಮ್ಮ ವಿದ್ಯಾರ್ಥಿನಿ ರಚಿಸಿರುವುದು ಸಂತಸದ ಸಂಗತಿ ಹಾಗೂ ಇನ್ನೂ ಅನೇಕ ಕವನಗಳನ್ನು ರಚಿಸಿ ಸಾಹಿತ್ಯಕ್ಕೆ ಕೊಡುಗೆ ನೀಡುವಂತಾಗಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಿದ್ಯಾರ್ಥಿನಿ ಕು. ಕೀರ್ತನಾ ಇವರಿಗೆ ಶುಭಾಶೀರ್ವಾದ ಮಾಡಿದರು. ಇವರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ನಡೆದ ೯ನೇ […]

ರಕ್ಷಾಬಂಧನ

Monday, August 27th, 2018

ದಿನಾಂಕ 27.08.2018ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು. “ಒಂದೊಂದು ಹಬ್ಬವು ಒಂದೊಂದು ಸಂದೇಶವನ್ನು ನೀಡುತ್ತದೆ, ಮನುಷ್ಯರು ಒಬ್ಬರನ್ನೊಬ್ಬರು ರಕ್ಷಣೆ ಮಾಡುತ್ತಾ ನಾನು ನಿನ್ನನ್ನು – ನೀನು ನನ್ನನ್ನು ರಕ್ಷಿಸುವುದರ ಮೂಲಕ ಒಬ್ಬರನ್ನೊಬ್ಬರು ರಕ್ಷಿಸುತ್ತಾ, ಜೊತೆಯಲ್ಲಿ ದೇಶವನ್ನು ಕೂಡ ರಕ್ಷಿಸುವ” ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ಆಶಿಸಿದರು. “ಸಾಮೂಹಿಕವಾಗಿ ರಕ್ಷೆಯನ್ನು ಕಟ್ಟಿ ನಾವೆಲ್ಲರೂ ಒಂದಾಗಿ ಪರಸ್ಪರ […]

ಓಣಂ ಹಬ್ಬ ಆಚರಣೆ- ಪದವಿ ಕಾಲೇಜಿನಿಂದ ಸಂತ್ರಸ್ತ ಪರಿಹಾರ ನಿಧಿಗೆ ಸ್ಪಂದನೆ

Saturday, August 25th, 2018
ಓಣಂ ಹಬ್ಬ ಆಚರಣೆ- ಪದವಿ ಕಾಲೇಜಿನಿಂದ ಸಂತ್ರಸ್ತ ಪರಿಹಾರ ನಿಧಿಗೆ ಸ್ಪಂದನೆ

ಕಲ್ಲಡ್ಕ, ಆ:25, ಇತ್ತೀಚೆಗೆ ಸಂಭವಿಸಿದ ಭಾರಿ ಮಳೆಯ ಕಾರಣಕ್ಕೆ ನೆರೆ ಹಾಗೂ ಭೂಕುಸಿತದಿಂದ ತತ್ತರಿಸಿ ಹೋಗಿರುವ ಕೇರಳ ಮತ್ತು ಕೊಡವರ ಬಾಳು ದುಸ್ತರವಾಗಿದೆ. ಅವರುಗಳು ತಮ್ಮ ಸ್ವಂತ ಆಸ್ತಿ ಪಾಸ್ತಿ ಅಷ್ಟೇ ಅಲ್ಲದೇ ಅನೇಕ ಬಂಧು- ಭಾಂದವರನ್ನು ಕಣ್ಣೇದುರೇ ಕಳಕೊಳ್ಳುವ ಸ್ಥಿತಿ ಎಲ್ಲರನ್ನು ಕಂಗೆಡಿಸಿದೆ. ಇದು ಕೇವಲ ಸಹಾನುಭೂತಿಯಾಗಿ ಉಳಿಯದೇ ವಿವಿಧ ರೀತಿಯ ಆರ್ಥಿಕ ಸ್ಪಂದನೆಯ ಮೂಲಕ ಸಂತ್ರಸ್ತರಿಗೆ ನೆರವಾಗಬೇಕು. ಇದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೀಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಬದಲಾಗಿ ನಾವು ನಮ್ಮ ದೈನಂದಿನ […]

ವಿಜ್ಞಾನ ಮೇಳ

Saturday, August 25th, 2018
ವಿಜ್ಞಾನ ಮೇಳ

ದಿನಾಂಕ 23.08.2018 ರಂದು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ ಬಾಲವರ್ಗದ ವಿಜ್ಞಾನ ಮಾದರಿಯಲ್ಲಿ 7ನೇ ತರಗತಿಯ ಸೌರಭ.ವಿ.ಎಸ್ ಪ್ರಥಮ, 6ನೇ ತರಗತಿಯ ಕುಶಿ-ಪ್ರಥಮ, ಹಾಗೂ 6ನೇ ತರಗತಿಯ ಶ್ರೀಜನ್ಯ ತೃತೀಯ ಸ್ಥಾನವನ್ನು ಗಳಿಸಿದರು. ಸಂಸ್ಕೃತ ಜ್ಞಾನ ರಸಪ್ರಶ್ನೆಯಲ್ಲಿ 7ನೇ ತರಗತಿಯ ಚರಣ್, ರ್ವಣಿ ಹಾಗೂ 6ನೇ ತರಗತಿಯ ದೀಕ್ಷಿತ್ ಪ್ರಥಮ ಸ್ಥಾನವನ್ನು ಪಡೆದವರಾಗಿರುತ್ತಾರೆ. […]

ಸಾಮೂಹಿಕ ಹುಟ್ಟು ಹಬ್ಬ ಆಚರಣೆ

Saturday, August 25th, 2018
ಸಾಮೂಹಿಕ ಹುಟ್ಟು ಹಬ್ಬ ಆಚರಣೆ

ದಿನಾಂಕ – 25.08.2018ನೇ ಶನಿವಾರ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಹನುಮಾನ್ ನಗರ ಕಲ್ಲಡ್ಕ ಇಲ್ಲಿನ ವೇದವ್ಯಾಸ ಧ್ಯಾನಮಂದಿರದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣ ಮತ್ತು ಭಜನಾ ಕಾರ್ಯಕ್ರಮವನ್ನು ಆಚರಿಸಲಾುತು. ಹುಟ್ಟುಹಬ್ಬವನ್ನು ಆಚರಿಸುವ ಮಕ್ಕಳಿಗೆ ಗುರುವೃಂದದವರಿಂದ ಆರತಿ ಅಕ್ಷತೆ ತಿಲಕಧಾರಣೆ, ಸಿಹಿ ವಿತರಣೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು. “ಹುಟ್ಟುಹಬ್ಬವನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು ಹಾಗೂ ಪುರಾಣದ ಕಥೆಗಳಲ್ಲಿನ ಮಹಾಪುರುಷರ ಆದರ್ಶ […]

ವರಮಹಾಲಕ್ಷ್ಮೀ ಪೂಜೆ

Saturday, August 25th, 2018
ವರಮಹಾಲಕ್ಷ್ಮೀ ಪೂಜೆ

ದಿನಾಂಕ24.08.2018 ಶುಕ್ರವಾರದಂದು ಶ್ರೀರಾಮ ಶಿಶುಮಂದಿರದ ವತಿಯಿಂದ ವಿವಿಧೆಡೆಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು . ಮುಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಶ್ರೀ ಮಾತಾನಂದಮು ಸ್ವಾಮಿನಿಯವರು ಆಗಮಿಸಿ ಪೂಜೆಯ ಮಹತ್ವ ತಿಳಿಸಿ ಆರ್ಶೀವಚನ ಮಾಡಿದರು. 44 ಮಂದಿ ವೃತಧಾರಿಗಳಾಗಿದ್ದು, ಒಟ್ಟು 350 ಸಂಖ್ಯೆ ಭಾಗವಹಿಸಿದ್ದರು. ಶ್ರೀ ಶಾರದಾ ಭಜನಾ ಮಂದಿರ ವೀರಕಂಭದಲ್ಲಿ 67 ವೃತಧಾರಿಗಳಾಗಿದ್ದು, 400ಕ್ಕೂ ಹೆಚ್ಚು ಸಂಖ್ಯೆ  ಭಾಗವಹಿಸಿದ್ದರು. ಶ್ರೀ ಯತಿರಾಜ್ ಶ್ರೀಮಾನ್ ಶ್ರೀರಾಮ ಪದವಿ ಕಾಲೇಜಿನ ಉಪನ್ಯಾಸಕರು ಪೂಜೆಯ ಮಹತ್ವ ತಿಳಿಸಿಕೊಟ್ಟರು. ಕಶೆಕೋಡಿ ಕಲಾಶ್ರಯದಲ್ಲಿ ಮಾತೃಮಂಡಳಿಯವರ ನೇತೃತ್ವದಲ್ಲಿ ನಡೆಸಲ್ಪಟ್ಟ ಪೂಜೆಯಲ್ಲಿ 26 ವೃತಧಾರಿಗಳು […]

ರಕ್ಷಾ ಬಂಧನ ಸಂದೇಶ – ಡಾ| ಪ್ರಭಾಕರ ಭಟ್ ಕಲ್ಲಡ್ಕ

Friday, August 24th, 2018
ರಕ್ಷಾ ಬಂಧನ ಸಂದೇಶ - ಡಾ| ಪ್ರಭಾಕರ ಭಟ್ ಕಲ್ಲಡ್ಕ

ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

Thursday, August 23rd, 2018
ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ದಿನಾಂಕ 23.8.2018ರಂದು ಶ್ರೀರಾಮ ಪದವಿ ಪೂರ್ವವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳವನ್ನು ನಡೆಯಿತು. ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕರಾದ ಸುಶೀಲರವರು ಪೊಟಾಶಿಯಮ್ ಅಯೋಡೈಡ್ ಮತ್ತು ಐಡ್ರೋಜನ್ ಪೆರಾಕ್ಸೈಡ್ ವರ್ಧನೆಯನ್ನು ಪ್ರಯೋಗ ಮಾಡಿ ತೋರಿಸುವುದರ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುವ ಮೂಲಕ ದೇಶದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಶ್ರೀರಾಮವಿದ್ಯಾಕೇಂದ್ರದ ಸಂಚಾಲಕರು, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿಯೂ ಆಗಿರುವ ವಸಂತ […]

ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ

Thursday, August 23rd, 2018
ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ

ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ದಿನಾಂಕ 23.08.2018ರಂದು ಶ್ರೀರಾಮ ಪ್ರೌಢ ಶಾಲಾ ವಿಭಾಗದಲ್ಲಿ ನಡೆಸಲಾಯಿತು.  ಮೌಲ್ಯ ವರ್ಧನಾ ಸಲಹೆಗಾರರು ಹಾಗೂ ತರಬೇತುದಾರರಾದ ಶ್ರೀ  ಶಿವಣ್ಣ ಇವರು ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಶ್ರೀರಾಮ ಪದವಿ ಕಾಲೇಜಿನಲ್ಲಿ ಕದಿಕೆ ತುಳು ಸಂಘ ಉದ್ಘಾಟನೆ

Thursday, August 23rd, 2018
ಶ್ರೀರಾಮ ಪದವಿ ಕಾಲೇಜಿನಲ್ಲಿ ಕದಿಕೆ ತುಳು ಸಂಘ ಉದ್ಘಾಟನೆ

ಕದಿಕೆ ತುಳು ಸಂಘವನ್ನು ಶ್ರೀ ನರೇಶ್ ಕುಮಾರ್ ಸಸಿಹಿತ್ಲು ಉದ್ಘಾಟಿಸಿದರು. ಇವರು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರೀರಾಮ ವಿದ್ಯಾಕೇಂದ್ರ ಬಹಳ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಎಂದು ನುಡಿದರು. ತುಳು ಸಂಘವು ತುಳು ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು. ನಂತರ ಆಟಿ ತಿಂಗಳ ವಿಶೇಷತೆ, ತುಳು ಜನರ ಬದುಕಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಬಟ್ ಕಲ್ಲಡ್ಕ […]