ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಗಳಿಗೆ ಅನುಗುಣವಾಗಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ತತ್ವ ಆದರ್ಶಗಳ ಪಾರಂಪರಿಕ ಹಿನ್ನಲೆಯಲ್ಲಿ ಆರಂಭವಾದ ವಿದ್ಯಾಸಂಸ್ಥೆಯು ಶ್ರೀರಾಮ ವಿದ್ಯಾಕೇಂದ್ರ. ಮಾನವೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಲ್ಲಿ ದೈಹಿಕ, ಬೌದ್ಧಿಕ, ಹಾರ್ದಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಬೆಳೆಸುವುದರೊಂದಿಗೆ ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವ ಸಂಕಲ್ಪದೊಂದಿಗೆ ಶಿಕ್ಷಣ ಸಂಸ್ಥೆ ನಿರಂತರವಾಗಿ ಬೆಳೆದು ಬಂದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಸಣ್ಣ ಊರು ಕಲ್ಲಡ್ಕ. ಬಾಳ್ತಿಲ ಗ್ರಾಮದ ಹನುಮಾನ್ ನಗರದಲ್ಲಿರುವ ಪ್ರಶಾಂತ ವಾತವರಣದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಿವಿಧ ತರಗತಿಗಳು ಕಾರ್ಯನಿರ್ವಹಿಸುತ್ತಿವೆ.

ಶ್ರೀರಾಮ ಭಜನಾ ಮಂದಿರವು ಊರಿನ ಶ್ರದ್ಧಾ ಕೇಂದ್ರವಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆಯ ಸ್ಥಳವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆ ಕೇಂದ್ರವಾಗಿ ನೂರಾರು ಯುವಕರಿಗೆ ರಾಷ್ಟ್ರೀಯ ಕಾರ್‍ಯದಲ್ಲಿ ಸ್ಪೂರ್ತಿಯನ್ನು ನೀಡಿದೆ. ರಾಷ್ಟ್ರ ಜಾಗೃತಿಯ ಹೋರಾಟದಲ್ಲಿ ಹಲವು ನಾಯಕರನ್ನು ತೊಡಗಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ಇಲ್ಲಿಂದ ಸಿಕ್ಕಿದೆ.

“ಮಕ್ಕಳ ರೂಪದಲ್ಲಿರುವ ನಮ್ಮನ್ನು ದೇವರೆತ್ತರಕ್ಕೆ ಏರಿಸಿಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ- ಉದ್ಧರೇದಾತ್ಮನಾನಮ್”.

M/S Sri Rama Vidya Kendra Trust (R)
SB Ac No: 110501010011381
Vijaya Bank Kalladka

ಶ್ರೀರಾಮ ಶಿಶುಮಂದಿರ ಹನುಮಾನ್ ನಗರ ಕಲ್ಲಡ್ಕ
ಶ್ರೀಕೃಷ್ಣ ಶಿಶುಮಂದಿರ ಸಜಿಪ ಮೂಡ
ಶ್ರೀಗಣೇಶ ಶಿಶುಮಂದಿರ ಬೊಂಡಾಲ

ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಹನದ ಸೌಕರ್ಯವು ಇಲ್ಲಿದ್ದು.ಸುಸಜ್ಜಿತವಾದ ಪ್ರಯೋಗಾಲಯ ಒಳಗೊಂಡಿದೆ