ಶ್ರೀರಾಮ ಶಿಶು ಮಂದಿರ: 3 ವರ್ಷದಿಂದ 6ವರ್ಷದೊಳಗಿನ ಪುಟಾಣಿಗಳಿಗೆ ಶಾರೀರಿಕ, ಮಾನಸಿಕ, ಬೌದ್ಧಿಕ, ಸೃಜನೆಶೀಲತೆ ಹಾಗೂ ಸ್ನಾಯುಗಳ ಬೆಳವಣಿಗೆಗೆ ಪೂರಕವಾದ ಸ್ವತಂತ್ರ ಚಟುವಟಿಕೆಗಳ ಮುಖಾತರ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತದೆ. ಇಲ್ಲಿ ವಿಶೇಷತೆ ಎಂದರೆ ಅಕ್ಷರ ಅಭ್ಯಾಸ, ಅಂಕ ಪಟ್ಟಿ, ಪರೀಕ್ಷೆಗಳು ಇರುವುದಿಲ್ಲ. ನಿತ್ಯ ತರಗತಿಯಲ್ಲಿ ಪ್ರತಿಯೊಂದು ಮಗುವಿನ ಶಕ್ತಿ ಸಾಮರ್ಥ್ಯದ ಅವಲೋಕನ ನಡೆಯುತ್ತದೆ. ಸಾಮಾಜಿಕ ಚಟುವಟಿಕೆಗಳಾದ ಮಾತೃಮಂಡಳಿ, ಬಾಲಗೋಕುಲ, ಕಿಶೋರ ಭಾರತಿ ಹಾಗೂ ನವದಂಪತಿ ಸಮಾವೇಶ, ಕುಟುಂಬ ಮಿಲನ, ಧಾರ್ಮಿಕ ಹಬ್ಬ ಹರಿದಿನಗಳು ಶಿಶುಮಂದಿರದಲ್ಲಿ ನಡೆಯುತ್ತದೆ. ಶಿಶುಮಂದಿರದ […]
ಶ್ರೀರಾಮ ಪ್ರಾಥಮಿಕ ಶಾಲೆ: 1988 – 1989ನೇ ಸಾಲಿನಲ್ಲಿ ಕೊಲ್ಯ ಶ್ರೀಶ್ರೀಶ್ರೀ ರಮಾನಂದ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರಾರಂಭವಾುತು. 55 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಪ್ರಸಕ್ತ ಸಾಲಿನಲ್ಲಿ 1154 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹಿರಿಯರ ಆಶಯದಂತೆ ಗುರುಕುಲ ಮಾದರಿಯ ಕುಟೀರಗಳಲ್ಲಿ ನೀಡಲಾಗುತ್ತಿರುವುದು ನಮ್ಮ ವಿದ್ಯಾಸಂಸ್ಥೆಯ ವಿಶೇಷತೆ. ವಿದ್ಯಾರ್ಥಿಗಳು ಮನೆುಂದ ಹೊರಟು ಶಾಲೆಗೆ ಬುರುವಾಗ ಹೊರ ಜಗತ್ತಿನ ಮಾನಸಿಕತೆುಂದ ಹೊರಬಂದು ಪಠ್ಯ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಲು ಪೂರಕವಾಗುವಂತೆ ಧ್ಯಾನ ಮಾಡುವುದಕ್ಕಾಗಿ ವೇದವ್ಯಾಸ ಧ್ಯಾನಮಂದಿರದ ಅನುಕೂಲತೆಯನ್ನು ಒದಗಿಸಲಾಗಿದೆ. ಶ್ರೀರಾಮ […]
ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ ಸಂಪರ್ಕ: 275273, 275183 1980ರಲ್ಲಿ ಇಲ್ಲಿನ ಕಾರ್ಯಕರ್ತರ ಚಿಂತನೆಯ ಫಲವಾಗಿ ಊರಿಗೆ ಅತಿ ಅಗತ್ಯವಾಗಿ ಬೇಕಾಗಿದ್ದ ಪ್ರೌಢಶಾಲೆಯು ಶ್ರೀರಾಮ ಭಜನಾ ಮಂದಿರಲ್ಲಿ ಆರಂಭಗೊಂಡಿತು. ಸುತ್ತುಮುತ್ತಲಿನ ಜನ ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಕೊಡಬೇಕೆಂಬ ಹೃದಯವಂತಿಕೆಯನ್ನು ಹೊಂದಿದ್ದರು. ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆಯು ಆರಂಭಗೊಳ್ಳುವ ಮೂಲಕ ಈಗಿನ ಬೃಹತ್ ವಿದ್ಯಾಸಂಸ್ಥೆಗೆ ನಾಂದಿಯಾಯಿತು. ಆರಂಭದಲ್ಲಿ ಶಿಕ್ಷಣ ಸಂಸ್ಥೆಗೆ ಕಲ್ಲಡ್ಕ ಪೇಟೆಯ ಸಮೀಪದ 9 ಎಕ್ರೆ ಸ್ಥಳವನ್ನು ಸಂಸ್ಥೆಗೆ […]
ಶ್ರೀರಾಮ ಪದವಿ ಪೂರ್ವ ವಿದ್ಯಾಲಯ : ಹನುಮಾನ್ ನಗರ ಕಲ್ಲಡ್ಕ ಸಂಪರ್ಕ: 08255-275293, 279673, ನಮ್ಮ ಧ್ಯೇಯ: ಹಿಂದುತ್ವನಿಷ್ಠ ಹಾಗೂ ರಾಷ್ಟ್ರಭಕ್ತಿಯಿಂದ ಕೂಡಿದ ಶಾರೀರಿಕ, ಮಾನಸಿಕ, ಬೌದ್ಧಿಕ, ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ವಿಕಸಿತಗೊಂಡ ಯುವ ಪೀಳಿಗೆಯನ್ನು ನಿರ್ಮಿಸುವಂತಹ ರಾಷ್ಟ್ರೀಯ ಶಿಕ್ಷಣ ವಿಧಾನವನ್ನು ವಿಕಸಿತಗೊಳಿಸಬೇಕಾಗಿದೆ. ಈ ಪೀಳಿಗೆಯು ಪ್ರಚಲಿತ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಅಲ್ಲದೆ ಅವರ ಜೀವನವು ಗಿರಿಕಂದರಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ಹಾಗೂ ಗುಡಿಸಲುಗಳಲ್ಲಿ ವಾಸಿಸುವವರನ್ನು, ದೀನ ದುಃಖಿಗಳನ್ನು, ದರಿದ್ರರನ್ನು ಸಾಮಾಜಿಕ ದುಶ್ಚಟಗಳಿಂದ ದೂರೀಕರಿಸಿ ಅವರನ್ನು ಶೋಷಣೆ ಹಾಗೂ […]
ಶ್ರೀರಾಮ ಪದವಿ ವಿದ್ಯಾಲಯ ಸಂಪರ್ಕ: 08255 – 275293, 279673 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2009 ರಲ್ಲಿ ಪದವಿ ಶಿಕ್ಷಣವನ್ನು ಪ್ರಾರಂಭ ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಕ್ಕೆ ಸಂಬಂಧಿಸಿದಂತೆ ಬಿ.ಎಸ್ಸಿ, ಬಿ.ಕಾಂ ಮತ್ತು ಬಿ.ಎ. ತರಗತಿಗಳು ನಡೆಯುತ್ತಿದೆ.
ಕ್ರ.ಸಂ. ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ (ರಿ) – ಸಿಬ್ಬಂಧಿಗಳು 1 ಶ್ರೀ ಕ. ಕೃಷ್ಣಪ್ಪ ಕಾರ್ಯನಿರ್ವಾಹಕ ಪ್ರಬಂಧಕ 2 ಶ್ರೀ ಜಯರಾಮ ಅಕೌಂಟೆಂಟ್ಸ್ 3 ಶ್ರೀ ಮನೋಜ್ ಸಾರ್ವಜನಿಕ ಸಂಪರ್ಕ ಅಧಿಕಾರಿ 4 ಶ್ರೀ ಬಾಬು ನಾಯ್ಕ ಕ್ರ.ಸಂ. ವಾಹನ ಚಾಲಕರು/ನಿರ್ವಾಹಕರು 1 ಶ್ರೀ ಪುರಂದರ ಬಸ್ಸು ಚಾಲಕರು 2 ಶ್ರೀ ಲಕ್ಷ್ಮಣ ಪೂಜಾರಿ ಬಸ್ಸು ಚಾಲಕರು 3 ಶ್ರೀ ಹರೀಶ್ ಇರಾ ಬಸ್ಸು ಚಾಲಕರು 4 ಶ್ರೀ ರಾಮ ಶೆಟ್ಟಿ ಬಸ್ಸು ಚಾಲಕರು 5 ಶ್ರೀ ಸುಭಾಶ್ […]