Archive for November, 2020

ತುಳಸಿ ಪೂಜೆ ಹಾಗೂ ಗೋಪೂಜೆ

Friday, November 27th, 2020
ತುಳಸಿ ಪೂಜೆ ಹಾಗೂ ಗೋಪೂಜೆ

ಶ್ರೀರಾಮ ಶಿಶುಮಂದಿರ ಕಲ್ಲಡ್ಕ ಇದರ ವತಿಯಿಂದ ಉತ್ಥಾನ ದ್ವಾದಶಿ ನಿಮಿತ್ತ ಶ್ರೀರಾಮ ವಿದ್ಯಾಕೇಂದ್ರದಲ್ಲಿ ತುಳಸಿ ಪೂಜೆ ಹಾಗೂ ಗೋಪೂಜೆ ನೆರವೇರಿತು. ಪೂಜಾ ಕಾರ್‍ಯಕ್ರಮವನ್ನು ಸೂರ್‍ಯಭಟ್ ಕಶೆಕೋಡಿ ಇವರು ನಡೆಸಿಕೊಟ್ಟರು. ಡಾ. ಪ್ರಭಾಕರ ಭಟ್ ದಂಪತಿಗಳು ಗೋವುಗಳಿಗೆ ಆರತಿ ಬೆಳಗಿ, ಹೂಹಾರ ಹಾಕಿ, ಬಾಳೆಹಣ್ಣು, ದೋಸೆಯನ್ನು ತಿನ್ನಿಸಿದರು. ಈ ಸಂದರ್ಭದಲ್ಲಿ ಸಂಚಾಲಕರು ವಸಂತ ಮಾಧವ, ವಿಭಾಗದ ಮುಖ್ಯಸ್ಥರುಗಳು, ಅಧ್ಯಾಪಕ ವೃಂದ, ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸಿದ್ಧಗೊಳ್ಳುತ್ತಿದೆ ಗೋಮಯ ಹಣತೆ

Monday, November 9th, 2020
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸಿದ್ಧಗೊಳ್ಳುತ್ತಿದೆ ಗೋಮಯ ಹಣತೆ

ಹಣತೆ ತಯಾರಿಸುವ ಕಾರ್ಯಾಗಾರ

Saturday, November 7th, 2020
ಹಣತೆ ತಯಾರಿಸುವ ಕಾರ್ಯಾಗಾರ

ಪ್ರಧಾನಿ ಮೋದಿ ಅವರ ಆಶಯದಂತೆ, ಆತ್ಮ ನಿರ್ಭರ ಭಾರತದ ಕನಸಿಗನುಗುಣವಾಗಿ ಈ ಬಾರಿಯ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲು ಪಣ ತೊಟ್ಟಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸ್ವದೇಶಿ ಹಣತೆ ತಯಾರಿಸುವ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ. 4 ನವೆಂಬರ್ 2020- 10 ನವೆಂಬರ್ 2020 ರ ವರೆಗೆ, ಒಂದು ವಾರದ ಅವಧಿಯಲ್ಲಿ ಸಂಸ್ಥೆಯ ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಹತ್ತು ಸಾವಿರಕ್ಕೂ ಹೆಚ್ಚಿನ ಹಣತೆಗಳನ್ನು ತಯಾರಿಸುವ ಕಾರ್ಯಕ್ರಮ ಇದಾಗಿದೆ. ವಿದ್ಯಾಕೇಂದ್ರಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು. ಈ ದೀಪಾವಳಿ ಸಂದರ್ಭದಲ್ಲಿ […]