ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸಿದ್ಧಗೊಳ್ಳುತ್ತಿದೆ ಗೋಮಯ ಹಣತೆ

Monday, November 9th, 2020
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸಿದ್ಧಗೊಳ್ಳುತ್ತಿದೆ ಗೋಮಯ ಹಣತೆ

ಹಣತೆ ತಯಾರಿಸುವ ಕಾರ್ಯಾಗಾರ

Saturday, November 7th, 2020
ಹಣತೆ ತಯಾರಿಸುವ ಕಾರ್ಯಾಗಾರ

ಪ್ರಧಾನಿ ಮೋದಿ ಅವರ ಆಶಯದಂತೆ, ಆತ್ಮ ನಿರ್ಭರ ಭಾರತದ ಕನಸಿಗನುಗುಣವಾಗಿ ಈ ಬಾರಿಯ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲು ಪಣ ತೊಟ್ಟಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸ್ವದೇಶಿ ಹಣತೆ ತಯಾರಿಸುವ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ. 4 ನವೆಂಬರ್ 2020- 10 ನವೆಂಬರ್ 2020 ರ ವರೆಗೆ, ಒಂದು ವಾರದ ಅವಧಿಯಲ್ಲಿ ಸಂಸ್ಥೆಯ ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಹತ್ತು ಸಾವಿರಕ್ಕೂ ಹೆಚ್ಚಿನ ಹಣತೆಗಳನ್ನು ತಯಾರಿಸುವ ಕಾರ್ಯಕ್ರಮ ಇದಾಗಿದೆ. ವಿದ್ಯಾಕೇಂದ್ರಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು. ಈ ದೀಪಾವಳಿ ಸಂದರ್ಭದಲ್ಲಿ […]

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಉಚಿತ ಕನ್ನಡಕ ವಿತರಣೆ 22.10.2020

Friday, October 23rd, 2020
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಉಚಿತ ಕನ್ನಡಕ ವಿತರಣೆ 22.10.2020

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಉಚಿತ ಕನ್ನಡಕ ವಿತರಣೆ 22.10.2020 ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಮತ್ತು ಪ್ರಸಾದ್ ನೇತ್ರಾಲಯ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ 10ದಿನಗಳ ಕಾಲ ಉಚಿತ ನೇತ್ರ ತಪಾಸಣಾ ಶಿಬಿರವು ಕಳೆದ ಜನವರಿ ತಿಂಗಳಿನಲ್ಲಿ ಜರಗಿತ್ತು. ನೇತ್ರ ತಪಾಸಣಾ ಸಂದರ್ಭದಲ್ಲಿ ಕನ್ನಡಕದ ಅವಶ್ಯಕತೆಯನ್ನು ತಿಳಿಸಿರುವವರಿಗೆ ದಿನಾಂಕ 22.10.2020ರಂದು ಶ್ರೀರಾಮ ಪ್ರಾಥಮಿಕ ಶಾಲಾ ವಿಭಾಗದ ವೇದವ್ಯಾಸ ಧ್ಯಾನ ಮಂದಿರದಲ್ಲಿ ಉಚಿತವಾಗಿ ಕನ್ನಡಕವನ್ನು ವಿತರಿಸಲಾತು. ಪ್ರಸಾದ್ ನೇತ್ರಾಲಯ ಮಂಗಳೂರು ಇದರ ಸಂಸ್ಥಾಪಕರಾದ ಡಾ| ಕೃಷ್ಣಪ್ರಸಾದ್ ಇವರು ಮಾತನಾಡಿ “ನಾವು ಈಗ […]

ವಿದ್ಯಾಗಮ ಕಾರ್ಯಕ್ರಮ 2020 ಆಗಸ್ಟ್

Wednesday, August 19th, 2020

ಶ್ರೀರಾಮ ಪ್ರೌಢ  ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳನ್ನು ಅವರ ಗ್ರಾಮಗಳಲ್ಲಿ ಸೇರಿಸಿ ವಿದ್ಯಾಗಮ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾಗಮ ಕಲಿಕಾ ಕಾರ್ಯಕ್ರಮದಡಿಯಲ್ಲಿ  ವಿದ್ಯಾರ್ಥಿಗಳು  ಕಲಿಕಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ವಿದ್ಯಾರ್ಥಿಗಳು ಸರಸ್ವತಿ ವಂದನೆ ಮಾಡಿ ಸೇತುಬಂಧ ಪರೀಕ್ಷೆ ಗಳನ್ನು ಬರೆದರು ಚಂದನ ವಾಹಿನಿಯಲ್ಲಿ ಬಂದ ಮತ್ತು ಅಧ್ಯಾಪಕರು ಕಳುಹಿಸಿದ ಚಟುವಟಿಕೆಗಳ ಟಿಪ್ಪಣಿಯನ್ನು ಪರಿಶೀಲಿಸಿ ಸಹಿಮಾಡಲಾಯಿತು . ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಬೇರೆ ಬೇರೆ ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಮಾರ್ಗದರ್ಶನ ಮಾಡಲಾಯಿತು.ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ […]

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಎಸ್.ಎಸ್.ಎಲ್.ಸಿ ಫಲಿತಾಂಶ 2020

Saturday, August 15th, 2020
ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಎಸ್.ಎಸ್.ಎಲ್.ಸಿ ಫಲಿತಾಂಶ 2020

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಂಶಿ ದೇವಾಡಿಗ 600 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಆದಿತ್ಯ ಮೈಥಿಲಿ 589 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಅಮೃತಾ 584 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದು, ವರ್ಷ ಕೆ 581, ಯಶ್ವಿತ್ 577, ವಿಂಧ್ಯಾ 577 ಮತ್ತು ತೃತೀಯ ಕನ್ನಡದಲ್ಲಿ 100ರಲ್ಲಿ 100, ದೀಪಕ್ 569, ವರ್ಷ 568, ಶ್ರಮಾ 568 ಪೂಜಾ 566, ಅನಘಾ 563ದೊಂದಿಗೆ 90%ಕ್ಕಿಂತ ಹೆಚ್ಚು ಅಂಕ ಪಡೆದಿರುತ್ತಾರೆ. ಉತ್ತೀರ್ಣಗೊಂಡ 210 ವಿದ್ಯಾರ್ಥಿಗಳಲ್ಲಿ 30 ಮಂದಿ ವಿಶಿಷ್ಟ ಶ್ರೇಣಿ 151 ಮಂದಿ ಪ್ರಥಮ ಶ್ರೇಣಿ, 29 […]

ರಕ್ಷಾ ಬಂಧನದ ಶುಭಾಶಯಗಳು

Monday, August 3rd, 2020
ರಕ್ಷಾ ಬಂಧನದ ಶುಭಾಶಯಗಳು

ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರ ರಕ್ಷಾ ಬಂಧನದ ಸಂದೇಶ

ಕೃಷಿ ಕಾರ್‍ಯಕ್ಕೆ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರಿಂದ ಚಾಲನೆ

Saturday, July 25th, 2020
ಕೃಷಿ ಕಾರ್‍ಯಕ್ಕೆ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರಿಂದ ಚಾಲನೆ

ಬಾಳ್ತಿಲ ಗ್ರಾಮದ ಸುಧೆಕ್ಕಾರ್ ಎಂಬಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವಿದ್ಯಾರ್ಥಿಗಳು ಪ್ರತೀ ವರ್ಷ ಭತ್ತದ ಕೃಷಿ ಕಾರ್‍ಯ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ  ಈ ಕೃಷಿ ಕಾರ್‍ಯವನ್ನು ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು, ಅಭಿವೃದ್ದಿ ಸಮಿತಿ ಸದಸ್ಯರು, ಮಾತೃಭಾರತಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಊರಿನವರ ಸಹಕಾರದಿಂದ 7 ಎಕ್ರೆ ಭೂಮಿಯಲ್ಲಿ ಭತ್ತದ ಕೃಷಿ ಕಾರ್‍ಯವನ್ನು ನಡೆಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ನೇಜಿ ತೆಗೆಯುವ ಮೂಲಕ ಕೃಷಿ ಕಾರ್‍ಯಕ್ಕೆ ಚಾಲನೆ ನೀಡಿದರು. ಈ […]

ಲಾಕ್ ಡೌನ್ ಸಂದರ್ಭದಲ್ಲಿ ಸೇವಾ ಚಟುವಟಿಕೆ

Saturday, July 18th, 2020

ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ, ಆಂಗ್ಲ ಮಾಧ್ಯಮವೇ ಶ್ರೇಷ್ಠ ಎಂಬ ಮನೋಭಾವ, ಹೊರಲಾರದಷ್ಟು ಪುಸ್ತಕಗಳು, ಹೋಂವರ್ಕ್ ಹೊರೆ, ಅಂಕಗಳಿಕೆಗಾಗಿ ನಾಗಲೋಟ ಇದು ಇಂದಿನ ಸಾಮಾನ್ಯ ದೃಶ್ಯ *ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಶಿಕ್ಷಣ ಸಂಸ್ಥೆ. ಇಲ್ಲಿನ ಶಿಕ್ಷಣದಲ್ಲಿ ಭಾರತೀಯತೆ ಇದೆ. ವ್ಯಕ್ತಿತ್ವ ವಿಕಾಸಕ್ಕಾಗಿ ನಡವಳಿಕೆಯ ಸತ್ಸಂಸ್ಕಾರವಿದೆ. ಜೀವನ ಮೌಲ್ಯವಿದೆ. ಆಧ್ಯಾತ್ಮಿಕ ಚಿಂತನೆ ಇದೆ. ಸೃಜನಶೀಲತೆ ಇದೆ. ಪ್ರತಿಭೆಗೆ ಪ್ರೋತ್ಸಾಹವಿದೆ. ಸಮಾಜ ಸೇವೆ ಇದೆ. ದೇಶಭಕ್ತ ವ್ಯಕ್ತಿಗಳ ನಿರ್ಮಾಣ ಕಾರ್ಯ ನಿರಂತರವಾಗಿದೆ……………..* ಯಾ ವಿದ್ಯಾ ಸಾ ವಿಮುಕ್ತಯೇ* ಮಹಾಮಾರಿ […]

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ- 93% ಫಲಿತಾಂಶ:

Friday, July 17th, 2020
ಶ್ರೀರಾಮ ಪದವಿ ಪೂರ್ವ ವಿದ್ಯಾಲಯ- 93% ಫಲಿತಾಂಶ:

2019-20ನೇ ಸಾಲಿನ ದ್ವಿತೀಯ ಪಿ.ಯು.ಸಿಯ  ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಪೈಕಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ  303 ವಿದ್ಯಾರ್ಥಿಗಳ ಪೈಕಿ 282  ವಿದ್ಯಾರ್ಥಿಗಳು  ತೇರ್ಗಡೆಗೊಂಡು 47 ವಿಶಿಷ್ಟ ಶ್ರೇಣಿ, 179 ಪ್ರಥಮ ಶ್ರೇಣಿ ಪಡೆದು 93%  ಫಲಿತಾಂಶ ಸಾಧಿಸಿದೆ. ವಿಜ್ಞಾನ ವಿಭಾಗದಲ್ಲಿ ಸೌಮ್ಯ 571, ವಾಣಿಜ್ಯ ವಿಭಾಗದಲ್ಲಿ ನವ್ಯ 571, ಕಲಾ ವಿಭಾಗದಲ್ಲಿ ಭಾಗೇಶ್ 517 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 205 ವಿದ್ಯಾರ್ಥಿಗಳ ಪೈಕಿ 35 ಅತ್ಯುನ್ನತ ಶ್ರೇಣಿ, […]

ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಹಿಳಾ ವಾಲಿಬಾಲ್

Friday, February 28th, 2020
ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಹಿಳಾ ವಾಲಿಬಾಲ್

ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟ ಉದ್ಘಾಟನೆ ಬಂಟ್ವಾಳ, ಫೆ.೨೮: ಕ್ರೀಡೆಯು ಜೀವನದ ಒಂದು ಅವಿಭಾಜ್ಯ ಅಂಗ. ಇದರಿಂದ ಜೀವನ ಮೌಲ್ಯವು ಹೆಚ್ಚುವುದು. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳೇ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವುದು ನಮ್ಮ ಕ್ರೀಡಾಲೋಕಕ್ಕೆ ಸಲ್ಲಬೇಕಾದ ಗೌರವ. ಕ್ರೀಡೆಯು ಸಕಾರಾತ್ಮಕ ಸ್ಪರ್ಧಾ ಮನೋಭಾವವನ್ನು ಪ್ರತೀ ಸ್ಫರ್ಧಾಳುಗಳಲ್ಲಿ ಮೂಡಿಸುವುದರ ಜೊತೆಗೆ ಸೋಲು ಗೆಲುವುಗಳಲ್ಲೂ ಸಮಾನವಾಗಿ ಸ್ವೀಕರಿಸಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಕಿಶೋರ್ ಕುಮಾರ್ ಸಿ ಕೆ ಇವರು ಮಂಗಳೂರು […]